Thursday, August 17, 2006

ಷಷ್ಟಾಬ್ಧಿ ಶಾಂತಿ

ಇಂದು ೧೭ ನೆ ಆಗಷ್ಟ, ೨೦೦೬, ನನ್ನ ಅತ್ತಿಗೆಯ ಚಿಕ್ಕಪ್ಪನ ಅರವತ್ತನೆ ವರ್ಷದ ಶಾಂತಿ ಅಂದರೆ ಷಷ್ಟಿ ಪೂರ್ತಿ ಶಾಂತಿಯನ್ನು ನೆರವೆರಿಸಲಾಯಿತು.

ಅವರ ಮನೆ ಮುಟ್ಟಿದ ತಕ್ಷಣ ಬಂದ ವಿಚಾರ ಯಂದರೆ, "ಒಳಗೆ ಹೋಗಿ ಏನು ಹೆಳ ಬೇಕು ?"

"ಹುಟ್ಟು ಹಬ್ಬದ ಶುಭಾಶಯಗಳು...." ಅಥವ "Happy Married life" ಎನ್ನಬೇಕೆ ???

ಅಲ್ಲಿ ಇದ್ದ ಜನರನ್ನು ಕೆಳಿದರೆ ಯಾವುದೆ ಒಳ್ಳೆ ಉತ್ತರ ಸಿಗದೆ, "Congratulations" ಅಂದೆ, ತಿಂಡಿಯ ನಂತರ ನನ್ನ ಕೆಲಸದ ಕಡೆಗೆ ಪ್ರಯಾಣ ಬೆಳೆಸಿದೆ.

ಆಟೋ ಹತ್ತಿ ಕೂತರು ನನ್ನ ಬೆನ್ನ ಬಿಡದ ಪ್ರಶ್ನೆ.....

ಅರವತ್ತು ಎಂದ ಕೂಡಲೇ ತಲೆಗೆ ಬಂದದ್ದು, "ಅರವತಕ್ಕೆ ಅರಳು ಮರಳು"....

ಈದರ ಅರ್ಥ ಏನು ? ಯೋಚಿಸುತ್ತಾ ಕೂತೆ,

ಕೋನೆಗೆ ತಿಳಿದ ವಿಷಯ

ಅರವತ್ತು ನಾವು ತಿಳಿದ ಹಾಗೆ, ಮುದರುವ ವಯಸಲ್ಲಾ, ಅರಳುವ ವಯಸ್ಸು

ಅರವತ್ತರ ಹರಯದ ವ್ಯಕ್ತಿ ಮಗುವಿನ ಸಮಾನ, ಅಂದರೆ "ಬಾಲ್ಯಕ್ಕೆ ಮರಳು"

ಅರವತಕ್ಕೆ ಹೂವಿನ ಹಾಗೆ ಅರಳು, ನಿನ್ನ ಬಾಲ್ಯಕ್ಕೆ ಮರಳು

ಈ ಯೊಚನೆ ನನ್ನ ಮನಸ್ಸಿಗೆ ನೆಮ್ಮದಿ ತಂದು ಕೊಟ್ಟಿತ್ತು, ಆಟೋ ನನ್ನ ಕಛೇರಿಯ ಮೂಂದೆ ನಿಂತಿತ್ತು

೬೦ ರೂ ಕೊಟ್ಟು ನನ್ನ ಕಛೇರಿಯ ಕಡೆಗೆ ದಾಪುಗಾಲು ಹಾಕಿದೆ.

ಶಾಂತಿಯ ಹಿನ್ನೆಲೆ


ನಮ್ಮ ಹಿಂದು ಪಂಚಾಂಗದಲ್ಲಿ ೬೦ ಸಂವತ್ಸರಗಳು ಇವೆ, ಒಬ್ಬ ವ್ಯಕ್ತಿಗೆ ೬೦ ವರ್ಷ ವಾದರೆ ಅವರು ಎಲ್ಲಾ ೬೦ ಸಂವತ್ಸರಗಳನ್ನು ನೋಡಿ ತಾವು ಹುಟ್ಟಿದ ಸಂವತ್ಸರಕ್ಕೆ ಮರಳಿರುತಾರೆ, ಇದು ಆ ವ್ಯಕ್ತಿಯ ಹೋಸ ಜನ್ಮವನ್ನು ಸೂಚಿಸುತ್ತದೆ, ಈ ಶುಭ ಸಂಧರ್ಭದಲ್ಲಿ ಶಾಂತಿಯ ಮೂಲಕ ಅವರ ಧಿರ್ಗಾಯುಶ್ಯಕ್ಕಾಗಿ ಪ್ರಾರ್ಥಿಸುವುದು.

ಆಷ್ಟೆ ಅಲ್ಲದೆ, ದಾಂಪತ್ಯ ನಡೆಸುತಿರುವ ವ್ಯಕ್ತಿಯು ತನ್ನ ಪತ್ನಿಯೋಡನೆ ಮರು ಮದುವೆಯಾಗಿ, ತನ್ನ ಅಧಿಕಾರವನ್ನೆಲ್ಲಾ ಮಕ್ಕಳಿಗೆ ಧಾರೆಯರೆದು ತನ್ನ ಪತ್ನಿಯ ಜೊತೆ ವಾನಪ್ರಸ್ತಾಶ್ರಮ ಸೇರಲು ಮಾಡುವ ಸಿದ್ದತೆ ಈ ಶಾಂತಿ.

Labels:

1 Comments:

Blogger Akash said...

Good control....fonts are a bit unreadable..slightly bigger/bold might help

I am awaiting snaps from your new camera ??

-A

3:56 AM  

Post a Comment

Subscribe to Post Comments [Atom]

<< Home